
ಬಿ. ಎಲ್. ಆಚಾರ್ಯ, ಹಿರಿಯ ವಕೀಲರು, ಬೆ0ಗಳೂರು.
ಕೇಂದ್ರ ಸರ್ಕಾರವು “ಅಪರಾಧ ಕಾನೂನು” (ಕ್ರಿಮಿನಲ್ ಕಾರ್ಯವಿಧಾನ) ಪರಿಷ್ಕರಿಸಿರುವ ಮಸೂದೆಗಳನ್ನು ಪರಿಚಯಿಸುತ್ತಿದೆ.
ನಮ್ಮ ದೇಶದ ಅಪರಾಧ (ಕ್ರಿಮಿನಲ್) ಕಾನೂನುಗಳನ್ನು ಕೂಲಂಕುಷವಾಗಿ ಪರಿಶೀಲಿಸಿ ಪರಿಷ್ಕರಿಸುವ ಮೂರು ಮಸೂದೆಗಳನ್ನು ಗೃಹ ವ್ಯವಹಾರದ ಸಚಿವಾಲಯವು 2023ರ ಅಗಸ್ಟ್ ರಂದು ಲೋಕಸಭೆಯಲ್ಲಿ ಮಂಡಿಸಿದೆ.
- IPC 1973 (Indian Penal Code,1973) ಬದಲಿಗೆ BNS 2023 (Bharatiya ನಯ್ಯಾ Sanhita 2023).
- ದಂಡ ಪ್ರಕ್ರಿಯಾ ಸಂಹಿತೆ (Code of Criminal Procedure) ಬದಲಿಗೆ:
”BNS 2023”(ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ, 2023). - ಭಾರತೀಯ ಸಾಕ್ಷ್ಯ ಅಧಿನಿಯಮ, 1872 (Indian Evidence Act) ಬದಲಿಗೆ “ಭಾರತೀಯ ಸಾಕ್ಷ್ಯ ಅಧಿನಿಯಮ, 2023.
ಇದುವರೆಗಿನ ಭಾರತದ ಕ್ರಿಮಿನಲ್ ಕಾನೂನು ವ್ಯವಸ್ಥೆಯು IPC (ಇಂಡಿಯನ್ ಪೀನಲ್ ಕೋಡ್) ಎಂಬ 163 ವರ್ಷಗಳ ಹಿಂದಿನ ವಸಾಹತುಶಾಹಿಯುಗದ (COLONIAL) ತಳಪಾಯವನ್ನು ಆಧರಿಸಿದೆ.
ಮೂರು ಮಸೂದೆಗಳನ್ನು ಪರಿಶೀಲನೆ ಮತ್ತು ಶಿಫಾರಸ್ಸುಗಳಿಗಾಗಿ ಗೃಹ ವ್ಯವಹಾರಗಳ ಸಂಸದೀಯ ಸ್ಥಾಯೀ ಸಮಿತಿಗೆ ಸಲ್ಲಿಸಲಾಗಿದೆ. ಬಿಜೆಪಿ ಸಂಸದ ಬ್ರಿಜ್ ಲಾಲ್ ನೇತೃತ್ವದ ಸಮಿತಿಯು ಒಟ್ಟು 30 ಸದಸ್ಯರನ್ನು ಒಳಗೊಂಡಿದೆ.
ಉದ್ದೇಶ:
a) ವಶಪಡಿಸಿಕೊಂಡಿರುವ ಲ್ಯಾಪ್ಟಾಪ್ ಗಳು, ಫೋನ್ಗಳು ಮತ್ತು ಇತರೆ ಎಲೆಕ್ಟ್ರಾನಿಕ್ ಸಂಪರ್ಕ ಸಾಧನಗಳನ್ನು ತನಿಖಾ ಸಂಸ್ಥೆಗಳು (ತನಿಖಾ ಪ್ರಕ್ರಿಯೆಗಳಿಗಾಗಿ) ಬಳಸಿಕೊಳ್ಳಬೇಕು. ಇವರೆಗೆ ಪ್ರಚಲಿತವಿರುವ ಕಾನೂನುಗಳು “ಎಲೆಕ್ಟ್ರಾನಿಕ್” ಮತ್ತು “ಡಿಜಿಟಲ್” ಪದಗಳನ್ನು ಒಳಗೊಂಡಿಲ್ಲ ವಾದುದರಿಂದ ನಿಖರವಾಗಿ ಯಾವ ವಸ್ತುಗಳನ್ನು ವಶಪಡಿಸಿಕೊಳ್ಳಬೇಕು ಮತ್ತು ಎಲೆಕ್ಟ್ರಾನಿಕ್ ಪುರಾವೆಗಳನ್ನು ವಶಪಡಿಸಿಕೊಳ್ಳುವಾಗ ಅನುಸರಿಸಬೇಕಾದ ಕಾರ್ಯವಿಧಾನಗಳೇನು ಎಂಬುದರ ಬಗ್ಗೆ ಅನಿಶ್ಚಿತತೆಯಿದೆ.
b) ನ್ಯಾಯಾಲಯಗಳಲ್ಲಿನ ಎಲೆಕ್ಟ್ರಾನಿಕ ಸಾಕ್ಷ್ಯ:
ನೂತನವಾಗಿ ಅನುಷ್ಠಾನಗೊಳ್ಳುತ್ತಿರುವ ಭಾರತ ಸಾಕ್ಷ್ಯ ಕಾಯಿದೆಯು ಇಮೇಲ್ ಗಳು, ಸರ್ವರ್ ಲಾಗ್ ಗಳು, ಎಲೆಕ್ಟ್ರಿಕ್ ಮಸೇಜ್ ಗಳು ಇತ್ಯಾದಿಗಳನ್ನು ಮುದ್ರಿತ (ಕಾಗದದ) ದಾಖಲೆಗಳಂತಯೇ ಅದೇ ಕಾನೂನು ಪರಿಣಾಮದೊಂದಿಗೆ ನ್ಯಾಯಾಲಯಗಳಲ್ಲಿ ಸಾಕ್ಷಿಯಾಗಿ ಪರಿಗಣಿಸಲು ಅನುಮತಿಸುತ್ತದೆ. ಪ್ರಸಕ್ತ ಕಾನೂನುಗಳ ಅಡಿಯಲ್ಲಿ ಇದನ್ನು ಸರಿಯಾಗಿ ಉಚ್ಛರಿಸಲ್ಲವಾದ್ದರಿಂದ ನ್ಯಾಯಾಲಯಗಳಲ್ಲಿ ಅಂತಹ ಪುರಾವೆಗಳ ಸಂಗ್ರಹಣೆ ಮತ್ತು ಪ್ರಸ್ತುತಿ ಪ್ರಕ್ರಿಯೆಗಳಲ್ಲಿ ನಿರಂಕುಶತೆಯುಂಟಾಗುತ್ತದೆ.
c) Digitalisation (ಡಿಜಿಟಿಲೀಕರಣ):
ಹೊಸ ಕಾನೂನುಗಳಿಗೆ ಎಫ್. ಐ. ಆರ್ (ಇ-FIR) ನೋಂದಣಿಯಿಂದ ಚಾರ್ಜ್ಶೀಟ್ ಸಲ್ಲಿಸುವವರೆಗಿನ ಹಾಗೂ ತೀರ್ಪು ನೀಡುವವರೆಗಿನ ಸಂಪೂರ್ಣ ಪ್ರಕ್ರಿಯಗಳ ಡಿಜಿಟಲೀಕರಣದ ಅಗತ್ಯವಿರುತ್ತದೆ. ಈ ಕಾನೂನು-ಸಾಕ್ಷಿಗಳು, ಆರೋಪಿಗಳು, ತಜ್ಞರು, ಸಂತ್ರಸ್ಥರು ಇವರುಗಳು ಎಲೆಕ್ಟ್ರಾನಿಕ್ ಮಾಧ್ಯಮದ ಮೂಲಕ ನ್ಯಾಯಾಲಯದಲ್ಲಿ ಕಾಣಿಸಿಕೊಂಡು ಪ್ರತಿಕ್ರಯಿಸಲು ಅನುಮತಿ ನೀಡುತ್ತದೆ. ಈ ಕಾರ್ಯಗಳನ್ನು ಸಕ್ರಿಯಗೊಳಿಸಲು 2027 ರ ವೇಳೆಗೆ ಎಲ್ಲಾ ನ್ಯಾಯಾಲಯಗಳನ್ನು ಗಣಕೀಕರಣ (ಕಂಪ್ಯೂಟರೀಕರಣ) ಗೊಳಿಸಲು ಬೇಕಾಗುತ್ತದೆ.
d) ಅಸ್ತಿತ್ವದಲ್ಲಿರುವ ಪ್ರಕರಣಗಳ ಹೊಂದಾಣಿಕೆ:
ಹೊಸಕಾಯಿದೆಗಳು ದೇಶದಾದ್ಯಂತ ಈಗಾಗಲೇ ಬಾಕಿಯಿರುವ ಪ್ರಕರಣಗಳ ಅಡಿಯಲ್ಲಿ ನಿಬಂಧನೆಗಳನ್ನು ತಿಳಿದುಕೊಳ್ಳಲು ಪೋಲಿಸರಿಗೆ ಮತ್ತು ನ್ಯಾಯಾಂಗ ವ್ಯವಸ್ಥೆಗಳಿಗೆ ಮರುತರಬೇತಿ ನೀಡುವ ಅಗತ್ಯವಿದೆ.
ಕ್ರಿಮಿನಲ್ ಕಾನೂನುಗಳ ಮೂಲಕ ನ್ಯಾಯ ಒದಗಿಸುವ ಪ್ರಕ್ರಿಯೆಗಳ ಸುಧಾರಣೆಯ ಉದ್ದೇಶದಿಂದ ಹೊಸ ಕಾನೂನು ಮತ್ತಷ್ಟು ಹೊಸ ನಿಬಂಧನೆಗಳನ್ನು ಹೊಂದಿದೆ. ಉದಾ: FIR ನ ಎಲೆಕ್ಟ್ರಾನಿಕ್ ಸಲ್ಲಿಕೆ (e-filing of FIR) ಸಂತ್ರಸ್ಥರಿಗೆ ಸಹಾಯವಾಗುವಂತೆ ತ್ವರಿತವಾಗಿ ಅಪರಾಧವನ್ನು ವರದಿ ಮಾಡುವ ಉದ್ದೇಶದಿಂದ ಶಾಸಕಾಂಗವು ಇ-ಫೈಲಿಂಗ್ FIR ವ್ಯವಸ್ಥೆಯನ್ನು ಮಾಡಿದೆ. ಉದಾಹರಣೆಗೆ ಒಬ್ಬ ಮಹಿಳೆ ದೈಹಿಕ ಹಲ್ಲೆಗೊಳಗಾದ ಸಂದರ್ಭದಲ್ಲಿ ಸಂತ್ರಸ್ತೆಯು ತನ್ನ ದೈಹಿಕ ಗಾಯಗಳಿಂದ (ಅಥವಾ ದುರ್ಬಲತೆಯಿಂದಾಗಿ) ಹತ್ತಿರದ ಪೋಲಿಸ್ ಠಾಣೆಗೆ ಭೇಟಿ ನೀಡಲು ಅಶಕ್ತಳಾಗಿದ್ದರೆ, ಆಕೆ ತನ್ನ ಫೋನ್ ಮೂಲಕ ಪೋಲಿಸರಿಗೆ ಇ-ಮೇಲ್ ಕಳಿಸಬಹುದು. ಇಂತಹ ಸಂದರ್ಭಗಳಲ್ಲಿ ಸಂಬಂಧಪಟ್ಟ ಪೋಲಿಸರು ಮೂರು ದಿನಗಳವರೆಗೆ ಕಾಯಬೇಕಾಗಿಲ್ಲ. ತಕ್ಷಣ ಅಪರಾಧದ ಸ್ಥಳಕ್ಕೆ ಭೇಟಿ ನೀಡಬಹುದು ಮತ್ತು ಅಗತ್ಯವಿದ್ದರೆ ಸಂತ್ರಸ್ಥರನ್ನು ಆಸ್ಪತ್ರೆಗೆ ಸ್ಥಳಾಂತರಿಸಬಹುದು. ಈ ವಿನೂತನ ಕಾನೂನು ಅತ್ಯಂತ ಸ್ವಾಗತಾರ್ಹ.
“ಭಾರತ ನ್ಯಾಯ ಸಂಹಿತಾ“–
ಇದು ಮುಖ್ಯವಾಗಿ ಕ್ರಿಮಿನಲ್ ಅಪರಾಧಗಳ ಮೇಲಿನ ಕಾನೂನು ಆಗಿದೆ.
ಲಘು ಅಪರಾಧಗಳಿಗೆ ಸಮುದಾಯ ಸೇವೆಯನ್ನು ಒಂದು ದಂಡವಾಗಿ ಶಿಕ್ಷೆ ವಿಧಿಸಬಹುದಾದ ವಿಧಾನವನ್ನು ಪ್ರಪ್ರಥಮ ಬಾರಿಗೆ ಇದರಲ್ಲಿ ನಮೂದಿಸಲಾಗಿದೆ.
ಭಾರತ ನ್ಯಾಯ ಸಂಹಿತೆಯು ಭಾರತ ಗಣರಾಜ್ಯದ ಅಧಿಕೃತವಾದ ಕ್ರಿಮಿನಲ್ ಸಂಹಿತೆಯಾಗಿದೆ.
ಭಾರತ (ಇಂಡಿಯಾ) ಎಂದರೆ ಸಾಮಾನ್ಯವಾಗಿ ಒಂದು ಉಪಖಂಡ ಎಂದೇ ಕರೆಯಲಾಗುವ ದೊಡ್ಡ ಪರ್ಯಾಯ ದ್ವೀಪದ ಪ್ರದೇಶವಾಗಿದೆ. ಇದು ದಕ್ಷಿಣ ಏಷ್ಯಾದಲ್ಲಿ ಹಿಮಾಲಯದ ದಕ್ಷಿಣಕ್ಕೆ ಬಂಗಾಳ ಕೊಲ್ಲಿ ಮತ್ತು ಅರಬ್ಬೀ ಸಮುದ್ರದ ನಡುವೆ ಇದೆ ಹಾಗೂ ಪಾಕ್, ಬಾಂಗ್ಲಾದೇಶಗಳು ಆಕ್ರಮಿಸಿಕೊಂಡ ಪ್ರದೇಶಗಳು ಮತ್ತು ಹಿಂದಿನ ಬರ್ಮಾ ದೇಶವನ್ನು ಒಳಗೊಂಡಿದೆ.
ಭರತ ಎಂಬುದು (ಭಾರತ ದೇಶದ ವಿವಿಧ ಹೆಸರುಗಳಲ್ಲೊಂದು) ಭಾರತೀಯ ಮೂಲದ ಒಬ್ಬ ಹುಡುಗನ ಹೆಸರು ಆಗಿದೆ. ಇದು ಸಂಸ್ಕೃತದ ʼತಡೆದುಕೊಳ್ಳುವ ಅಥವಾ ಹೊತ್ತುಕೊಳ್ಳುವʼ (ಬೆಂಕಿಗೆ ಸಂಬಂಧಿಸಿದಂತೆ) ಎಂಬ ಅರ್ಥವುಳ್ಳ ಶಬ್ಧವಾಗಿದೆ ʼಭಾರತʼ ಎಂಬುದು ಸಂಸ್ಕೃತ ಭಾಷೆಯ ಪ್ರಾಚೀನ ಗ್ರಂಥಗಳಲ್ಲಿ ಕಾಣಬಹುದಾದ ಶಬ್ಧವಾಗಿದೆ. ಇದರ ಆಧ್ಯಾತ್ಮಿಕ ಅರ್ಥವು ಭಾರತೀಯ ಸಂಸ್ಕೃತಿಯ ಜಾಗತಿಕ ಚೇತನವಾಗಿದೆ. ಭಾರತ ಎಂಬುವುದರ ಅಕ್ಷರಶಃ ಅರ್ಥವು “ಪ್ರಕಾಶಕ್ಕಾಗಿ ಶ್ರಮಿಸುವವರು” ಎಂಬುದಾಗಿದೆ, ಅಂದರೆ ಯಾವುದೇ ಜನಾಂಗ, ರಾಷ್ಟ್ರೀಯತೆ, ಧರ್ಮ, ಲಿಂಗ, ಜಾತಿ ಇತ್ಯಾದಿಗಳ ಭೇಧವಿಲ್ಲದ ಅತ್ಯಂತ ಶ್ರೇಷ್ಠ ಮಟ್ಟದ ಮಾನವೀಯ ಪರಿಪೂರ್ಣತೆಯಾಗಿದೆ.
ನೂತನ ಹೆಸರಿನ ಅನಿವಾರ್ಯತೆ
IPC (ಇಂಡಿಯನ್ ಪೀನಲ್ ಕೋಡ್) ಎಂಬುದು ಭಾರತದ ಅಧಿಕೃತ ಅಪರಾಧ ಕಾನೂನು ಆಗಿದ್ದು, ಇದು ಸ್ವಾತಂತ್ರ್ಯದ ನಂತರ ʼಬ್ರಿಟೀಷ್ ಇಂಡಿಯಾʼ ದಿಂದ ಪರಂಪರಾಗತವಾಗಿ ಪಡೆದುದಾಗಿದೆ. ಅಪರಾಧಗಳಿಗೆ ಸಂಬಂಧಿಸಿದ ಕಾನೂನುಗಳನ್ನು ಕ್ರೊಢೀಕರಿಸಲು ಮತ್ತು ತಿದ್ದುಪಡಿ ಮಾಡಲು IPC ಯನ್ನು ರದ್ದುಗೊಳಿಸಲು BNS (ಭಾರತೀಯ ನ್ಯಾಯ ಸಂಹಿತೆ) ಯನ್ನು ಆಚರಣೆಗೆ ತರಲಾಯಿತು. ಅಧಿಕ ಅಪರಾಧೀಕರಣ ಹಾಗೂ ನಿರಪರಾಧೀಕರಣಗಳ ನಡುವೆ ಒಂದು ಸಮತೋಲನವಾಗುವಂತೆ BNS ಪರಿಣಮಿಸುತ್ತದೆ. IPC ಯ ವಸಾಹತುಶಾಹಿತ್ವವನ್ನು ತೆಗೆದು ಹಾಕಲು ಈ ಬದಲಾವಣೆ ಅಗತ್ಯವಾಯಿತು. ಅಂದರೆ ಪರ್ಯಾಯವಾಗಿ ಇದೊಂದು ಭಾರತೀಯ ಕ್ರಿಮಿನಲ್ ನ್ಯಾಯ ವ್ಯವಸ್ಥೆಯಲ್ಲಿ ಒಂದು ಮಹತ್ತರವಾದ ಬದಲಾವಣೆಯಾಗಿ BNS (ಭಾರತೀಯ ನ್ಯಾಯ ಸಂಹಿತೆ) ಯಲ್ಲಿ “ನ್ಯಾಯ” ಎಂಬ ಕಲ್ಪನೆಯನ್ನು ಹೊಂದಿದೆ. ಭಾರತಕ್ಕೆ ಒಂದು ಸಾಮಾನ್ಯ ದಂಡ ಸಂಹಿತೆಯನ್ನು ಒದಗಿಸುವುದು ಇದರ ಉದ್ದೇಶವಾಗಿದೆ ಎಂಬುದನ್ನು IPC ತನ್ನ ಪೀಠಿಕೆಯಲ್ಲಿ ತಿಳಿಸಿದೆ. IPC ಎಂಬ ಶೀರ್ಷಿಕೆಯು ಶಿಕ್ಷೆ ಎಂಬುದನ್ನು ಸೂಚಿಸುತ್ತದೆ. ಪೀನಲ್(Penal) ಎಂಬ ಶಬ್ದವು ಅಪರಾದ ಮಾಡಿದವರನ್ನು ಶಿಕ್ಷಿಸುವುದು ಎಂಬುದನ್ನು ಒತ್ತಿ ಹೇಳುತ್ತದೆ.
ಮೇಲೆ ತಿಳಿಸಿರುವ ವಿಷಯಗಳನ್ನು ತುಲನೆ ಮಾಡಿ ನೋಡಿದರೆ, ಹೊಸ ಕಾನೂನು ನಾಗರೀಕರಿಗೆ ಶಿಕ್ಷೆ(ದಂಡನೆ) ವಿಧಿಸುವುದೆಂಬ ಎಣಿಕೆಯ ಬದಲು “ನ್ಯಾಯ ಒದಗಿಸುವುದು” ಎಂಬುದಾಗಿ ಸೂಚಿಸುತ್ತದೆ.
ಭಾರತೀಯ ಸಂಸ್ಕೃತಿಯನ್ನು ಪರಿಗಣಿಸಿಕೊಂಡು ಹೊಸ ಕಾನೂನಿನ ಶೀರ್ಷಿಕೆಯನ್ನು ಸರಿಯಾಗಿ ಯೋಚಿಸಿ ಸಮಂಜಸವಾಗಿಯೇ ಹೆಸರಿಸಲಾಗಿದೆ ಎಂದು ನನ್ನ ಅಭಿಪ್ರಾಯ.
ಭಾರತ ನ್ಯಾಯ ಸಂಹಿತೆಯಲ್ಲಿರುವ ಅತ್ಯಂತ ಗಮನಾರ್ಹ ಬದಲಾವಣೆ ಏನೆಂದರೆ ಐಪಿಸಿ ಸೆಕ್ಷನ್ 124A ರಲ್ಲಿ ಪ್ರತಿಷ್ಠಾಪಿಸಿದ್ದ ದೇಶದ್ರೋಹದ ವಸಾಹಾತುಶಾಹಿ ಕಾನೂನನ್ನು ತೆಗೆದು ಹಾಕಿರುವುದು. ಆದರೆ ಸೆಕ್ಷನ್ 124A ರಲ್ಲಿನ ಸಾರವನ್ನು ಭಾರತೀಯ ನ್ಯಾಯ ಸಂಹಿತೆ ಸೆಕ್ಷನ್ 152 ಉಳಿಸಿಕೊಂಡಿರುವುದು ಗಮನಾರ್ಹವಾಗಿದೆ ಮತ್ತು ಅದು ಅಸ್ಪಷ್ಟ ಎಂಬ ರೀತಿಯಲ್ಲಿ ತನ್ನೊಳಗಿನ ಶಬ್ಧರಚನೆಯನ್ನು ಹೊಂದಿದೆ. ಭಾರತೀಯ ಅಪರಾಧ ಶಾಸ್ತ್ರದಲ್ಲಿ ʼದೇಶದ್ರೋಹʼದ ಬಗ್ಗೆ ಸರ್ವೋಚ್ಚನ್ಯಾಯಾಲಯದ 1962ರ ಪ್ರಸಿದ್ಧವಾದ ತೀರ್ಪಿನ ಆಧಾರದಿಂದ ಕಾನೂನು ಆಯೋಗವು ಕೆಲವು ನಿರ್ದಿಷ್ಟ ಮಾರ್ಪಾಡುಗಳೊಂದಿಗೆ 2023ರಲ್ಲಿ (ಈ ಬಗ್ಗೆ) ಮಾಡಿದ ವರದಿಯ ಬಳಿಕ ದೇಶದ್ರೋಹದ ಹಳೆಯ ಕಾನೂನನ್ನು ತೆಗೆದುಹಾಕಲಾಗಿದೆ. ಭಾರತೀಯ ನ್ಯಾಯ ಸಂಹಿತೆಯ ಸೆಕ್ಷನ್ 152ರಲ್ಲಿ ʼವಿಧ್ವಂಸಕ ಚಟುವಟಿಕೆಗಳುʼ ಮತ್ತು ʼಸಮಗ್ರತೆಗೆ ಅಪಾಯವನ್ನುಂಟು ಮಾಡುವʼ ಎಂಬ ವಾಕ್ಯಾಂಶಗಳಿಗೆ ಸಮರ್ಪಕವಾದ ವ್ಯಾಖ್ಯಾನವಿಲ್ಲವಾದ್ದರಿಂದ ಈ ಸೆಕ್ಷನ್ ಅನ್ನು ಬಳಸುವಾಗ ಸಮಸ್ಯೆಯುಂಟಾಗಬಹುದು. ಭಾರತೀಯ ನ್ಯಾಯ ಸಂಹಿತೆಯ ಸೆಕ್ಷನ್ನ ತಪ್ಪು ಗ್ರಹಿಕೆಯಿಂದಾಗಿ ಒಬ್ಬ ವ್ಯಕ್ತಿಯ ಬಂಧನವಾದಲ್ಲಿ ಅಥವಾ ತನಿಖೆಯಾದಲ್ಲಿ ಅಂತಹ ವಿಚಾರವನ್ನು ಪ್ರಕರಣದ ಮೂಲಕವೇ ನ್ಯಾಯಾಂಗವು ಸರಿಪಡಿಸುವ ಪ್ರಮೇಯ ಬರಬಹುದು. ಆದುದರಿಂದ ನ್ಯಾಯಾಂಗದ ನಿರ್ಧಾರದ ಬೆಂಬಲದೊಂದಿಗೆ ಹೊಸ ಕಾನೂನಿನ ಮಿತಿಗಳನ್ನು ಸಮರ್ಪಕವಾಗಿ ವ್ಯಾಖ್ಯಾನಿಸುವವರೆಗೆ ವಿಶಾಲ ಜನಸ್ತೋಮದ ಸ್ವಾತಂತ್ರ್ಯ ಮೊಟಕುಗೊಳ್ಳುವ ಸಂಭಾವ್ಯತೆಯಿದೆ.
ಇತರೆ ಸೇರ್ಪಡೆಗಳು ಮತ್ತು ಬದಲಾವಣೆಗಳು
ಭಾರತೀಯ ನ್ಯಾಯ ಸಂಹಿತೆಯ ಸೆಕ್ಷನ್ 3ರಲ್ಲಿ ಸಂಘಟಿತ ಅಪರಾಧ (ORGANISED CRIMES) ಗಳ ವ್ಯಾಖ್ಯಾನವಿದೆ. ಈ ಅಪರಾಧಗಳಲ್ಲಿ ಒಂದು ಗುಂಪಿನಲ್ಲಿಯಾಗಲಿ ಅಥವಾ ಬೇರೊಬ್ಬರ ಪರವಾಗಿಯಾಗಲೀ ಕೈಗೊಂಡ ಅಪಹರಣ, ಭೂ ಕಬಳಿಕೆ ಇತ್ಯಾದಿ ಹಾಗೂ ಇಂತಹ ಇತರ ಅಪರಾಧಗಳು ಸೇರಿವೆ.
ನಿರ್ದಿಷ್ಟ ಉದ್ದೇಶಗಳ ಸ್ಪಷ್ಟಪಡಿಸುವಿಕೆಗಾಗಿ ವಿವಿಧ ವ್ಯಾಖ್ಯಾನಗಳನ್ನು ಬದಲಾಯಿಸಲಾಗಿದೆ. ಉದಾ:- ಐಪಿಸಿ ಸೆಕ್ಷನ್ 103ರಲ್ಲಿ ಬರುವ “ರಾತ್ರಿ” ಎಂಬುದನ್ನು ಭಾರತೀಯ ನ್ಯಾಯ ಸಂಹಿತೆಯ ಸೆಕ್ಷನ್ 43 ರಲ್ಲಿ “ಸೂರ್ಯಾಸ್ತದ ನಂತರ ಮತ್ತು ಸೂರ್ಯೋದಯಕ್ಕೆ ಮುಂಚೆ” ಎಂಬ ಪದಗಳಿಂದ ಬದಲಾಯಿಸಲಾಗಿದೆ. ಸೆಕ್ಷನ್ 41ರಲ್ಲಿ “ಬೆಂಕಿ” ಎಂಬುದನ್ನು “ಬೆಂಕಿಯಿಂದಾಗಿ ಕಿಡಿಗೇಡಿತನ” ಅಥವಾ “ಸ್ಫೋಟಕ ವಸ್ತು” ಎಂಬ ವಿಸ್ತರಣೆಯೊಂದಿಗೆ ಸೇರಿಸಲಾಗಿದೆ.
ಪಿತೂರಿ, ವಿಷಯಾಂತ್ಯಗೊಳಿಸುವಿಕೆ ಮತ್ತು ಅಂತಹ ಪ್ರಯತ್ನಗಳು (ATTEMPT AND ABATEMENT) ಮುಂತಾದ ತೀಕ್ಷ್ಣವಾದ ಅಪರಾಧವೆಲ್ಲವನ್ನೂ ಒಂದೇ ಅಧ್ಯಾಯದಲ್ಲಿ ಸಂಯೋಜಿಸಲಾಗಿದೆ. ಹಿಂದಿನ ಐಪಿಸಿ ಯಲ್ಲಿ ಇವುಗಳನ್ನು ಬೇರೆ ಬೇರೆ ವಿಭಾಗಗಳಲ್ಲಿ ಉಲ್ಲೇಖಿಸಲಾಗಿದೆ.
ಭಾರತೀಯ ನ್ಯಾಯ ಸಂಹಿತೆ (BNS) ಯಲ್ಲಿ ಸೆಕ್ಷನ್ 69 ಒಂದು ಉಚಿತವಾದ ಸೇರ್ಪಡೆಯಾಗಿದೆ. ಇದು ಐಪಿಸಿಯಲ್ಲಿ ಇಲ್ಲ. ಅತ್ಯಾಚಾರವೆಂದು ಪರಿಗಣಿಸಲಾಗದ ವಂಚನೆಯಿಂದ ಲೈಂಗಿಕ ಸಂಭೋಗ ಮಾಡಿದರೆ ಶಿಕ್ಷೆ ನೀಡುವ ಸಾಧ್ಯತೆಯನ್ನು ಒದಗಿಸುತ್ತದೆ. ಇಲ್ಲಿ ʼವಂಚನೆʼ ಎಂಬುದರಲ್ಲಿ ಸುಳ್ಳು ಭರವಸೆಗಳು ಮತ್ತು ಪ್ರೇರಣೆಗಳೂ ಸೇರಿವೆ.
ಸಾಮೂಹಿಕ ಅತ್ಯಾಚಾರದ ಅಪರಾಧಗಳಿಗೆ ಸಂಬಂಧಿಸಿದಂತೆ ಐಪಿಸಿ ಸೆಕ್ಷನ್ 376(1)ಎ ಯನ್ನು ವಿಸ್ತರಿಸಿ ಭಾರತೀಯ ನ್ಯಾಯ ಸಂಹಿತೆಯ ಸೆಕ್ಷನ್ 70(2) ರಲ್ಲಿ ಸಂಯೋಜಿಸಲಾಗಿದೆ. ಈ ವಿಸ್ತರಣೆಯಲ್ಲಿ “16 ವರ್ಷದ ಒಳಗಿನವರು” ಎಂಬುದನ್ನು “18 ವರ್ಷದ ಒಳಗಿನವರು ಎಂದು ಬದಲಾಯಿಸಿ ಹೆಚ್ಚು ಪ್ರಕರಣಗಳನ್ನು ತನ್ನ ವ್ಯಾಪ್ತಿಗೆ ತರಲಾಗಿದೆ.
ವಿವಿಧ ಅಪರಾಧಗಳಿಗೆ ನೀಡುವ ಶಿಕ್ಷೆಗಳನ್ನು ಗಮನಾರ್ಹವಾಗಿ, ಹೆಚ್ಚಿಸಲಾಗಿದೆ. ಅತ್ಯಂತ ಗಮನಾರ್ಹ ಹೆಚ್ಚಳವೆಂದರೆ ದುಡಿಕಿನ ಮತ್ತು ನಿರ್ಲಕ್ಷ್ಯದ ಚಾಲನೆ (RASH AND NEGLIGENT DRIVING) ಯಿಂದಾಗಿ ಮರಣ ಸಂಭವಿಸಿದಲ್ಲಿ ನೀಡಬಹುದಾದ ಶಿಕ್ಷೆ. ಐಪಿಸಿಯ ಸೆಕ್ಷನ್ 304(ಎ) ಯ ಪ್ರಕಾರ ಗರಿಷ್ಠ ಎರಡು ವರ್ಷಗಳ ಶಿಕ್ಷೆಯನ್ನು ಭಾರತೀಯ ನ್ಯಾಯ ಸಂಹಿತೆಯ ಸೆಕ್ಷನ್106(1)ರ ಅಡಿ ಯಲ್ಲಿ ಗರಿಷ್ಟ ಐದು ವರ್ಷಗಳಿಗೆ ಹೆಚ್ಚಿಸಲಾಗಿದೆ.
ಭಯೋತ್ಪಾದಕ ಚಟುವಟಿಕೆಗಳನ್ನು ಒಳಗೊಂಡ ಭಾರತೀಯ ನ್ಯಾಯ ಸಂಹಿತೆಯ ಸೆಕ್ಷನ್ 113 ಒಂದು ಸೇರ್ಪಡೆಯಾಗಿದೆ. ಪ್ರಾಯಶ: ಇದು ಕಾನೂನುಬಾಹಿರ ಚಟುವಟಿಕೆಗಳ ನಿಯಂತ್ರಣ ಕಾಯಿದೆ (UNLAWFUL ACTIVITIES (PREVENTION) ACT 1967) ಯಿಂದ ಪ್ರೇರಿತವಾಗಿದ್ದಿರಬಹುದು. ಆದರೆ ಯುಎಪಿಎ ಯಲ್ಲಿ ಇಲ್ಲದಿರುವ ದಂಡಗಳ ಮಿತಿಗಳನ್ನು ವಿವಿಧ ಉಪವಿಭಾಗಗಳಲ್ಲಿ ನಿರ್ದಿಷ್ಟವಾಗಿ ಉಲ್ಲೇಖಿಸಲಾಗಿದೆ.
ತಪ್ಪು ಮಾಹಿತಿ ಹರಡುವಿಕೆಯನ್ನು ತಡೆಯಲು ಸರಿಯಾದ ದಿಕ್ಕಿನಲ್ಲಿ ಒಂದು ಹೆಜ್ಜೆಯನ್ನು ಇಡಲಾಗಿದೆ. ಭಾರತೀಯ ನ್ಯಾಯ ಸಂಹಿತೆಯ ಸೆಕ್ಷನ್ 353 ಅಪ್ರಾಮಾಣಿಕ ಉದ್ದೇಶದಿಂದ ಸುಳ್ಳು ಮಾಹಿತಿಯನ್ನು ತಯಾರಿಸುವುದು ಪ್ರಕಟಿಸುವುದು ಅಥವಾ ಪ್ರಸಾರ ಮಾಡುವುದಕ್ಕೆ ಸಂಬಂಧಿಸಿದಂತೆ ಶಿಕ್ಷೆಯನ್ನು ಒದಗಿಸಿದೆ. ಅಂತಹ ನಿಬಂಧನೆಗಳನ್ನು ಐಪಿಸಿಯಲ್ಲಿ ಸ್ಪಷ್ಟವಾಗಿ ಉಲ್ಲೇಖಿಸಲಾಗಿಲ್ಲ, ಹಾಗಾಗಿ ಇದೇ ಉದ್ದೇಶಕ್ಕೆ ಮೀಸಲಾದ ಇತರ ಕಾನೂನುಗಳ ನಿರ್ವಹಣೆಗೆ ಈ ಹೊಸ ಕಾನೂನು ಪೂರಕವಾಗಿದೆ.
ಕಿಡಿಗೇಡಿತನದ ಅಪರಾಧಗಳಿಗೆ ನಿರ್ದಿಷ್ಟ ಮಿತಿಯ ದಂಡನೆಯ ಮೌಲ್ಯಗಳನ್ನು ಉಪ ಅಧಿನಿಯಮ 324ರ (4) ಮತ್ತು(5)ರಲ್ಲಿ ನೀಡಲಾಗಿದೆ. ಇದರನ್ವಯ ನಷ್ಟಗೊಳಿಸಲಾದ ಆಸ್ತಿಯ ಮೌಲ್ಯವು ಹೆಚ್ಚಾದಂತೆ ಜೈಲುಶಿಕ್ಷೆಯ ಅವಧಿಯೂ ಹೆಚ್ಚಾಗುತ್ತದೆ.
ಸರಕಾರ ಅಥವಾ ಪ್ರಾಧಿಕಾರಗಳಿಗೂ (ಸೇರಿದಂತೆ ) ಅಸ್ತಿ ಹಾನಿಗೆ ಒಂದು ಸಮಗ್ರ ದೃಷ್ಟಿಕೋನವಿರಿಸಿಕೊಂಡು ಒಂದರಿಂದ ಐದು ವರ್ಷಗಳವರೆಗಿನ ಶಿಕ್ಷೆ ಮತ್ತು ಜುಲ್ಮಾನೆ ಸೇರಿಸಿ ದಂಡ ವಿಧಿಸಬಹುದಾಗಿದೆ.
ಅಪಹರಣದ ಅಪರಾಧಕ್ಕಾಗಿ ಸೆಕ್ಷನ್ 137ರಲ್ಲಿ ಕಲ್ಪಿಸಲಾದ ಅಧಿನಿಯಮದಲ್ಲಿ ಅಪ್ರಾಪ್ತ ಬಾಲಕ ಮತ್ತು ಬಾಲಕಿಯರ ವಯಸ್ಸಿನ ನಡುವಿನ ವ್ಯತ್ಯಾಸವನ್ನು ತೆಗೆದುಹಾಕಲಾಗಿದೆ. “18 ವಯಸ್ಸಿನ ಯಾವುದೇ ವ್ಯಕ್ತಿ” ಎಂಬ ವ್ಯಾಖ್ಯಾನದಡಿಯಲ್ಲಿ “ಯಾವುದೇ ಮಗು” ಎಂಬ ಶಬ್ಧಗಳನ್ನು ಸೇರಿಸಲಾಗಿದೆ.
ಭಾರತೀಯ ನ್ಯಾಯ ಸಂಹಿತೆ ಮತ್ತು ಐಪಿಸಿಗಳ ನಡುವಿನ ಪ್ರಮುಖ ವ್ಯತ್ಯಾಸ ಏನೆಂದರೆ ಸೆಕ್ಸನ್ಗಳ ಸಂಖ್ಯೆಯನ್ನು 511ರಿಂದ 358ಕ್ಕೆ ಕಡಿಮೆ ಮಾಡಲಾಗಿದೆ ಮತ್ತು ದ್ವೇಷ ಅಪರಾಧ (Hate Crime ), ಗುಂಪು ಹತ್ಯೆ ( Mob Lynching ) ಗಳೂ ಸೇರಿದಂತೆ 21 ವಿಧದ ಹೊಸ ಅಪರಾಧಗಳ ಸೇರ್ಪಡೆಯಾಗಿದೆ.
ಉಪಸಂಹಾರ
ಪ್ರಸ್ತುತ ಸಾಮಾಜಿಕ ವಾತಾವರಣ ಮತ್ತು ಚೌಕಟ್ಟುಗಳಿಗೆ ಸರಿಹೊಂದುವಂತೆ ಐಪಿಸಿ (INDIAN PENAL CODE) ಯನ್ನು ಮರುಶೋಧಿಸಿ “ಭಾರತೀಯ ನ್ಯಾಯ ಸಂಹಿತೆ”ಯನ್ನು ಆಚರಣೆಗೆ ತರುವ ನಿರ್ಧಾರವು ಸಕಾರಾತ್ಮಕವಾದುದು ಎಂದು ನನ್ನ ಅಭಿಪ್ರಾಯ. ಇದರಲ್ಲಿ ವಸಾಹತುಶಾಹಿ ಮೂಲವಿರುವ ಬಹು ಹಳೆಯ ಮತ್ತು ಪ್ರಸ್ತುತ ಕಾನೂನಿನ ಸನ್ನಿವೇಶದಲ್ಲಿ ವಿಶ್ವಾಸಾರ್ಹತೆಯನ್ನು ಹೊಂದಿಲ್ಲದ ಕಾನೂನುಗಳನ್ನು ತೆಗೆದು ಹಾಕಿ ವಿವಿಧ ಗಮನಾರ್ಹ ಬದಲಾವಣೆಗಳಿವೆ. ಇದು ಲಿಂಗ ತಟಸ್ಥತೆ (Gender Neutrality) ಯಂತಹ ತತ್ವಗಳನ್ನು ಪ್ರತಿಪಾದಿಸುತ್ತದೆ. ಈ ಕಾನೂನಿನ ಪ್ರಾರಂಭದ ನಂತರ ನ್ಯಾಯಾಲಯಗಳಲ್ಲಿ ಹೊಸ ಸವಾಲುಗಳು ಉಧ್ಭವಿಸಿ ಹೊಸ ಪ್ರಶ್ನೆಗಳು ಮತ್ತು ವ್ಯಾಖ್ಯಾನಗಳು ಹುಟ್ಟಿಕೊಳ್ಳುತ್ತವೆ. ಇದರಿಂದಾಗಿ ಹಿಂದಿನ ಕಾನೂನಿನ ಪರಿಷ್ಕರಣೆ ಮತ್ತು ಹೊಸ ಕಾನೂನಿನ ಅಗತ್ಯತೆಗಳನ್ನು ನಾಗರಿಕರು ತಿಳಿಯಲು ಸಾಧ್ಯವಾಗುತ್ತದೆ ಮತ್ತು ಹೊಸ ಕಾನೂನಿನ ಪರಿಣಾಮವನ್ನು ಗುರುತಿಸಲು ಸಾಧ್ಯವಾಗುತ್ತದೆ.